ದೋಹಾದಲ್ಲಿ ನಡೆದ ಕದನ ವಿರಾಮ ಚರ್ಚೆಯು ಗಾಜಾಗೆ ಭರವಸೆಯ ಬೆಳಕು
ಫ್ರಾನ್ಸೆಸ್ಕಾ ಮೆರ್ಲೊ
ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸುವ ಪ್ರಯತ್ನಗಳು ನಿರ್ಣಾಯಕ ತಿರುವಿನ ಹಂತವನ್ನು ತಲುಪಿವೆ ಎಂದು ವರದಿಯಾಗಿದೆ. ಸಂಧಾನ ಮಾತುಕತೆಗಳ ನಂತರ, ಸೋಮವಾರ, ಕತಾರ್ ಇಸ್ರಯೇಲ್ ಮತ್ತು ಹಮಾಸ್ಗೆ ಕದನ ವಿರಾಮ ಒಪ್ಪಂದದ ಅಂತಿಮ ಕರಡನ್ನು ಮಂಡಿಸಿತು. ಕತಾರಿ ರಾಜಧಾನಿ ದೋಹಾದಲ್ಲಿ ನಡೆದ ಮಾತುಕತೆಯಲ್ಲಿ ಇಸ್ರಯೇಲ್ ಮತ್ತು ಹಮಾಸ್ ಪ್ರತಿನಿಧಿಗಳು, ಹಾಗೆಯೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ರವರು ಮತ್ತು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ರಾಯಭಾರಿಗಳು ಸೇರಿದ್ದರು.
ರಾಯಿಟರ್ಸ್ ವರದಿ ಮಾಡಿದಂತೆ, ಚರ್ಚೆಗಳಲ್ಲಿ ಭಾಗಿಯಾಗಿರುವ ಪ್ಯಾಲೇಸ್ತೀನಿಯದ ಅಧಿಕಾರಿಯೊಬ್ಬರು ಎಚ್ಚರಿಕೆಯ ಆಶಾವಾದವನ್ನು ಹಂಚಿಕೊಂಡರು, ಬೆಳವಣಿಗೆಗಳನ್ನು "ಬಹಳ ಭರವಸೆದಾಯಕ" ಎಂದು ಕರೆದರು ಮತ್ತು "ಅಂತರಗಳನ್ನು ಕಡಿಮೆ ಮಾಡಲಾಗುತ್ತಿದೆ, ಮತ್ತು ಕೊನೆಯವರೆಗೂ ಎಲ್ಲವೂ ಸುಸಜ್ಜಿತವಾಗಿ ನಡೆದರೆ ಒಪ್ಪಂದದತ್ತ ಸಾಗಲು ಒಂದು ದೊಡ್ಡ ಒತ್ತಡವಿದೆ" ಎಂದು ಹೇಳಿದರು.
ಮಾನವೀಯ ದುರಂತ
ಈ ಮಾತುಕತೆಗಳ ತುರ್ತು ವರ್ಣನಾತೀತ. ಅಕ್ಟೋಬರ್ 7, 2023 ರಿಂದ, ಗಾಜಾದಲ್ಲಿ 46,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಪಟ್ಟಿಯಲ್ಲಿ, ಮೂಲಸೌಕರ್ಯಗಳು ಹಾಳಾಗಿವೆ, ಉಳಿದಿರುವ ಕೆಲವೇ ಆಸ್ಪತ್ರೆಗಳು ನಿಭಾಯಿಸಲು ಹೆಣಗಾಡುತ್ತಿವೆ ಮತ್ತು ಆಹಾರ, ನೀರು ಮತ್ತು ವಿದ್ಯುತ್ನಂತಹ ಅಗತ್ಯ ಸರಬರಾಜುಗಳಿಗೆ ಪ್ರವೇಶ ತೀವ್ರವಾಗಿ ಸೀಮಿತವಾಗಿದೆ. ಮಾನವೀಯ ಬಿಕ್ಕಟ್ಟು ಗಂಟೆಗಟ್ಟಲೆ ಹದಗೆಡುತ್ತಿದೆ ಮತ್ತು ಜೀವಗಳನ್ನು ಉಳಿಸಲು ಕದನ ವಿರಾಮದ ಕಡೆಗೆ ಮಾತುಕತೆಗಳು ಅತ್ಯಗತ್ಯ.
ಮಾನವೀಯ ದುರಂತ
ಈ ಮಾತುಕತೆಗಳ ತುರ್ತು ಅವರ್ಣನೀಯವಾಗಿದೆ. ಅಕ್ಟೋಬರ್ 7, 2023 ರಿಂದ, ಗಾಜಾದಲ್ಲಿ 46,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯದವರು ಸಾವನ್ನಪ್ಪಿದ್ದಾರೆ. ಗಡಿಯಲ್ಲಿ, ಮೂಲಸೌಕರ್ಯಗಳು ಹಾಳಾಗಿವೆ, ಉಳಿದಿರುವ ಕೆಲವೇ ಆಸ್ಪತ್ರೆಗಳು ಚಿಕಿತ್ಸೆಗಳ ಕಾರ್ಯವನ್ನು ನಿಭಾಯಿಸಲು ಹೆಣಗಾಡುತ್ತಿವೆ ಮತ್ತು ಆಹಾರ, ನೀರು ಮತ್ತು ವಿದ್ಯುತ್ನಂತಹ ಅಗತ್ಯ ಸರಬರಾಜುಗಳ ಸೌಕರ್ಯವು ತೀವ್ರವಾಗಿ ಸೀಮಿತವಾಗಿದೆ. ಮಾನವೀಯ ಬಿಕ್ಕಟ್ಟು ಗಂಟೆಗಟ್ಟಲೆ ಹದಗೆಡುತ್ತಿದೆ ಮತ್ತು ಜೀವಗಳನ್ನು ಉಳಿಸಲು ಕದನ ವಿರಾಮದ ಕಡೆಗೆ ಮಾತುಕತೆಗಳು ಅತ್ಯಗತ್ಯವಾಗಿದೆ.
ಶಾಂತಿಯತ್ತ ಒಂದು ಹೆಜ್ಜೆ
ಪ್ರಸ್ತಾವಿತ ಒಪ್ಪಂದಕ್ಕೆ ಮೂಲಭೂತವಾದ ಮತ್ತೊಂದು ಹೆಜ್ಜೆಯೆಂದರೆ ಕೈದಿಗಳ ವಿನಿಮಯ, ಇದನ್ನು ಇಸ್ರಯೇಲ್ ಅಧ್ಯಕ್ಷರಾದ ಬೆಂಜಮಿನ್ ನೆತನ್ಯಾಹುರವರು ಮತ್ತು ಅಮೇರಿಕದ ಅಧ್ಯಕ್ಷರಾದ ಜೋ ಬೈಡೆನ್ ರವರು ದೂರವಾಣಿಯಲ್ಲಿ ಚರ್ಚಿಸಿದ್ದಾರೆ. ಹಮಾಸ್ 15 ತಿಂಗಳಿಗೂ ಹೆಚ್ಚು ಕಾಲ ಬಂಧಿಸಿದ್ದ 33 ಒತ್ತೆಯಾಳುಗಳು ಮತ್ತು ಗಾಯಗೊಂಡ ಇಸ್ರಯೇಲ್ ಸೈನಿಕರಿಗೆ ಪ್ರತಿಯಾಗಿ, ಇಸ್ರಯೇಲ್ 3,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯದ ಬಂಧಿತರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ ಎಂದು ಒಪ್ಪಂದವು ಹೇಳುತ್ತದೆ. ಇವರಲ್ಲಿ 200 ಜನರು ಪ್ರಸ್ತುತ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಹೆಚ್ಚಿನವರು ತಮ್ಮ ಮನೆಗಳಿಗೆ ಮರಳುವ ನಿರೀಕ್ಷೆಯಿದ್ದರೂ, ಭಾರೀ ಶಿಕ್ಷೆಯನ್ನು ಎದುರಿಸುತ್ತಿರುವವರು ಕತಾರ್, ಈಜಿಪ್ಟ್ ಅಥವಾ ಟರ್ಕಿಯಂತಹ ದೇಶಗಳಿಗೆ ಗಡಿಪಾರು ಮಾಡಬೇಕಾಗಬಹುದು ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳಲ್ಲಿ ದಕ್ಷಿಣ ಲೆಬನಾನ್ನಲ್ಲಿ ಕದನ ವಿರಾಮ ಒಪ್ಪಂದ ಮತ್ತು ಜನವರಿ 27 ರೊಳಗೆ ಇಸ್ರಯೇಲ್ ಪಡೆಗಳನ್ನು ಹಿಂತೆಗೆದುಕೊಳ್ಳುವ ಯೋಜನೆಯನ್ನು ಒಳಗೊಂಡಿವೆ. ಇದೇ ಮೊದಲ ಬಾರಿಗೆ ಇಸ್ರಯೇಲ್ ಪ್ರಧಾನಿ ಇಂತಹ ಒಪ್ಪಂದಗಳಿಗೆ ಮುಕ್ತತೆಯನ್ನು ತೋರಿಸಿದ್ದಾರೆ.
ಈ ಪ್ರದೇಶದ ರಾಜಕೀಯ ಚಿತ್ರಣ ಬದಲಾಗುತ್ತಿದ್ದಂತೆ, ವಿಶ್ವಗುರು ಫ್ರಾನ್ಸಿಸ್ ರವರು ವಿಶ್ವದ ಶಾಂತಿಗಾಗಿ, ವಿಶೇಷವಾಗಿ ಮಧ್ಯಪ್ರಾಚ್ಯಕ್ಕಾಗಿ ಪ್ರಾರ್ಥನೆಗಳನ್ನು ಕೇಳಿಕೊಳ್ಳುವ ಮೊದಲು, ಯುದ್ಧವು ಎಂದೆಂದಿಗೂ ಸೋಲನ್ನು ಅನುಭವಿಸುತ್ತಿದೆ ಎಂದು ಭಾನುವಾರ ತಮ್ಮ ಇತ್ತೀಚಿನ ಮನವಿಯಲ್ಲಿ ವಿಶ್ವಗುರುಗಳು ಪುನರುಚ್ಚರಿಸಿದರು.