ಉಕ್ರೇನ್'ಗೆ ಪ್ರೇಷಿತ ರಾಯಭಾರಿ: ಪೋಪ್ ಲಿಯೋ ಅವರೊಂದಿಗೆ ನಮ್ಮ ಭರವಸೆ ಮತ್ತು ಶೋಕವನ್ನು ಹಂಚಿಕೊಂಡಿದ್ದೇನೆ
ವರದಿ: ವ್ಯಾಟಿಕನ್ ನ್ಯೂಸ್
ಉಕ್ರೇನ್ ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿರುವ ಆರ್ಥಿಕ ವಿಸ್ವಲ್ದಾಸ್ ಕುಲ್ಬೊಕಾಸ್ ಅವರು ವ್ಯಾಟಿಕನ್ ನ್ಯೂಸ್ ಜೊತೆ ಮಾತನಾಡಿದ್ದಾರೆ. ಪೋಪ್ 14ನೇ ಲಿಯೋ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದು ಅವರೊಂದಿಗಿನ ಭೇಟಿ ಸಮಾಧಾನಕರವಾಗಿತ್ತು ಹಾಗೂ ಪ್ರಾರ್ಥನಾ ಪೂರಿತವಾಗಿತ್ತು ಎಂದು ಹೇಳಿದ್ದಾರೆ. ತಮ್ಮ ಮಾತುಕತೆಯಲ್ಲಿ ಉಕ್ರೇನ್ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ವಿಶ್ವಗುರುಗಳ ಜೊತೆ ನಡೆದ ಭೇಟಿಯ ಕುರಿತು ಮಾತನಾಡಿದ ಅವರು ಈ ಭೇಟಿ ಬಹಳ ಮುಖ್ಯವಾದ ಭೇಟಿಯಾಗಿದ್ದು ಇದನ್ನು ನಾವು ಬಹಳಷ್ಟು ಪ್ರಾರ್ಥನೆಯ ಮೂಲಕ ಮಾಡಿದ್ದೇವೆ ಏಕೆಂದರೆ ಇದು ಆಧ್ಯಾತ್ಮಿಕ ಭೇಟಿಯಾಗಿದ್ದು ಹಲವಾರು ವಿಷಯಗಳು ಕುರಿತು ವಿಶ್ವಗುರುಗಳೊಂದಿಗೆ ಚರ್ಚಿಸಬೇಕಿತ್ತು. ನಾನು ಇದೇ ಮೊದಲ ಬಾರಿಗೆ ವಿಶ್ವಗುರು ಲಿಯೋ ಅವರನ್ನು ಭೇಟಿ ಮಾಡುತ್ತಿರುವುದು. ಮೊದಲ ಭೇಟಿಯಲ್ಲಿ ಅವರು ಅನೇಕ ವಿಷಯಗಳ ಕುರಿತು ನನ್ನ ಬಳಿಯಿಂದ ಮಾಹಿತಿಯನ್ನು ಪಡೆದುಕೊಂಡರು ಹಾಗೂ ನಮಗಾಗಿ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದರು ಎಂದು ಆರ್ಚ್ ಬಿಶಪ್ ವಿಶ್ವಲ್ದಾಸ ಹೇಳಿದರು.
ಪರಿಸ್ಥಿತಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಉದಾಹರಣೆಗೆ, ಖೇರ್ಸನ್ನಲ್ಲಿ, ಪ್ರಾದೇಶಿಕ ಆಡಳಿತ ಕಟ್ಟಡ ನಾಶವಾಯಿತು. ಅಲ್ಲಿ, ನಾಲ್ಕು ವರ್ಷಗಳಿಂದ ಬಾಂಬ್ ದಾಳಿ ನಿರಂತರವಾಗಿ ನಡೆಯುತ್ತಿದೆ - ದಾಳಿಗಳು ತುಂಬಾ ಆಗಾಗ್ಗೆ ಆಗುತ್ತಿರುವುದರಿಂದ ಹತ್ತು ನಿಮಿಷಗಳ ಮೌನವೂ ಇಲ್ಲದಿರಬಹುದು. ಒಡೆಸಾ, ಜಪೋರಿಝಿಯಾ ಮತ್ತು ಖಾರ್ಕಿವ್ನಂತಹ ಇತರ ಸ್ಥಳಗಳು ನಿರಂತರವಾಗಿ ಜಾಗರೂಕತೆಯಲ್ಲಿರುತ್ತವೆ, ಆದರೂ ಕೆಲವು ವಿರಾಮಗಳೊಂದಿಗೆ. ನಂತರ ದೇಶದ ಉಳಿದ ಭಾಗಗಳಿವೆ, ಅಲ್ಲಿ ಎಚ್ಚರಿಕೆಗಳು ಕಡಿಮೆ ಆಗಾಗ್ಗೆ ಇರುತ್ತವೆ. ಆದರೆ ರಾಜಧಾನಿ ಕೈವ್ನಲ್ಲಿಯೂ ಸಹ, ಕನಿಷ್ಠ ಡ್ರೋನ್ ದಾಳಿಗಳಿಲ್ಲದೆ ತಿಂಗಳಿಗೆ ಒಂದು ಅಥವಾ ಎರಡು ರಾತ್ರಿಗಳನ್ನು ಕಂಡುಹಿಡಿಯುವುದು ಕಷ್ಟ ಎಂದು ಹೇಳುತ್ತಾ ಅವರು ತಮ್ಮ ದೇಶದ ಕುರಿತ ಪ್ರಸ್ತುತ ಪರಿಸ್ಥಿತಿಗಖ ಕುರಿತು ಮಾತನಾಡಿದ್ದಾರೆ.