MAP

ಗಾಜಾ ಪ್ರದೇಶಕ್ಕೆ ಮಾನವೀಯ ನೆರವನ್ನು ನೀಡಬೇಕೆಂದು ಪೋಪ್ ಮನವಿ

ವಿಶ್ವಗುರು 14ನೇ ಲಿಯೋ ಅವರು ಗಾಜಾ ಪ್ರದೇಶಕ್ಕೆ ಮಾನವೀಯ ನೆರವನ್ನು ನೀಡಬೇಕು ಎಂದು ಮತ್ತೊಮ್ಮೆ ಮನವಿಯನ್ನು ಮಾಡಿದ್ದಾರೆ. ಮಕ್ಕಳು ವೃದ್ಧರು ಹಾಗೂ ಮುಗ್ಧ ಜನರು ತಮ್ಮದಲ್ಲದ ತಪ್ಪಿಗೆ ಬೆಲೆ ತೆರುತ್ತಿರುವ ಯುದ್ಧವನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವಿಶ್ವಗುರು 14ನೇ ಲಿಯೋ ಅವರು ಗಾಜಾ ಪ್ರದೇಶಕ್ಕೆ ಮಾನವೀಯ ನೆರವನ್ನು ನೀಡಬೇಕು ಎಂದು ಮತ್ತೊಮ್ಮೆ ಮನವಿಯನ್ನು ಮಾಡಿದ್ದಾರೆ. ಮಕ್ಕಳು ವೃದ್ಧರು ಹಾಗೂ ಮುಗ್ಧ ಜನರು ತಮ್ಮದಲ್ಲದ ತಪ್ಪಿಗೆ ಬೆಲೆ ತೆರುತ್ತಿರುವ ಯುದ್ಧವನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

"ಪ್ರಪಂಚದಲ್ಲಿ ನಡೆಯುತ್ತಿರುವ ವಿವಿಧ ಯುದ್ಧಗಳಲ್ಲಿ ಮಕ್ಕಳು ವೃದ್ಧರು ಯುವ ಜನತೆ ಹಾಗೂ ಮುಗ್ಧ ಜನರು ತಮ್ಮದಲ್ಲದ ತಪ್ಪಿಗೆ ಬೆಲೆ ತರುತ್ತಿದ್ದಾರೆ. ಆದುದರಿಂದ ಎಲ್ಲಾ ರೀತಿಯ ಯುದ್ಧವನ್ನು ಹಾಗೂ ಹಿಂಸಾತ್ಮಕ ಸಂಘರ್ಷವನ್ನು ನಿಲ್ಲಿಸಬೇಕೆಂದು ಅಂತರಾಷ್ಟ್ರೀಯ ಸಮುದಾಯಕ್ಕೆ ನಾನು ಮನವಿ ಮಾಡುತ್ತಿದ್ದೇನೆ" ಎಂದು ವಿಶ್ವಗುರು ಲಿಯೋ ಅವರು ತಮ್ಮ ಸಾರ್ವಜನಿಕ ಭೇಟಿಯಲ್ಲಿ ಹೇಳಿದರು.

"ಇದೇ ವೇಳೆ ಇಟಾಲಿಯನ್ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಗಾಜಾಪ್ರದೇಶದ ಕುರಿತು ಪ್ರಸ್ತಾಪಿಸಿ, ಗಾಜ ಪ್ರದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ" ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಕಾರ, ಗಾಜಾದಲ್ಲಿ ಮಾನವೀಯ ತುರ್ತು ಪರಿಸ್ಥಿತಿಯು ಒಂದು ಬಿಕ್ಕಟ್ಟಿನ ಹಂತದಲ್ಲಿದೆ. ವಿಶ್ವಸಂಸ್ಥೆಯಿಂದ ಬೆಂಬಲಿತವಾದ ಸಮಗ್ರ ಆಹಾರ ಭದ್ರತಾ ಹಂತದ ವರ್ಗೀಕರಣ (ಐಪಿಸಿ)ವು ಸನ್ನಿಹಿತವಾದ ಕ್ಷಾಮದ ಬಗ್ಗೆ ಎಚ್ಚರಿಕೆ ನೀಡುತ್ತಿದೆ.

ನೆರವು ಸಂಸ್ಥೆಗಳ ಪ್ರಕಾರ, ಮೇ 20 ರಂದು ಇಸ್ರೇಲಿ ವೈಮಾನಿಕ ದಾಳಿಗಳು ಮಕ್ಕಳು ಸೇರಿದಂತೆ ಅನೇಕ ಪ್ಯಾಲೆಸ್ಟೀನಿಯನ್ನರ ಸಾವುಗಳಿಗೆ ಕಾರಣವಾದ ಕಾರಣ, ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ತೀವ್ರಗೊಂಡಿದೆ. ಅಕ್ಟೋಬರ್ 2023 ರಿಂದ ಹತ್ತಾರು ಸಾವಿರ ಜನರನ್ನು ಕೊಂದಿರುವ ಮಿಲಿಟರಿ ಕಾರ್ಯಾಚರಣೆಗಳ ನಡುವೆಯೂ ಇದು ಸಂಭವಿಸಿದೆ.

ಇಸ್ರೇಲ್ ಗಾಜಾಗೆ ಸೀಮಿತ ಸಂಖ್ಯೆಯ ನೆರವು ಟ್ರಕ್‌ಗಳಿಗೆ ಅವಕಾಶ ನೀಡಿದ್ದರೂ, ಅಂತರರಾಷ್ಟ್ರೀಯ ಟೀಕೆಗಳು ಹೆಚ್ಚಿವೆ, ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಮತ್ತು ನೆರವು ನಿರ್ಬಂಧಗಳನ್ನು ಸಡಿಲಿಸಬೇಕು ಎಂಬ ಕರೆಗಳು ಬಂದಿವೆ.

22 ಮೇ 2025, 05:25