ಎಂಬೆಯಾದಲ್ಲಿ 4,200ಕ್ಕೂ ಹೆಚ್ಚು ಭಾಗವಹಿಸುವವರನ್ನು ಆಕರ್ಷಿಸುವ ತಂಜಾನಿಯಾ ಕಥೊಲಿಕ ಯುವ ಸಮ್ಮೇಳನ
ಸಾರಾ ಪೆಲಾಜಿ, ತಂಜಾನಿಯಾ
ತಂಜಾನಿಯಾ ಧರ್ಮಾಧ್ಯಕ್ಷರುಗಳ ಸಮ್ಮೇಳನದ (TEC) ಯುವ ರಾಷ್ಟ್ರೀಯ ಕಚೇರಿಯಿಂದ ಆಯೋಜಿಸಲಾದ 6ನೇ ರಾಷ್ಟ್ರೀಯ ಕಥೋಲಿಕ ಯುವ ಕಾರ್ಮಿಕರ ಸಮ್ಮೇಳನ (VIWAWA), ಆಗಸ್ಟ್ 19-23 ರಂದು ಕಥೋಲಿಕ ವಿಶ್ವವಿದ್ಯಾಲಯದ ಎಂಬೆಯಾದಲ್ಲಿ (CUoM) ನಡೆಯುತ್ತಿದೆ.
ಈ ಕಾರ್ಯಕ್ರಮವನ್ನು ಎಂಬೆಯಾ ಕಥೋಲಿಕ ಮಹಾಧರ್ಮಕ್ಷೇತ್ರಗಳು ಆಯೋಜಿಸಿದ್ದು, ದೇಶಾದ್ಯಂತ 37 ಕಥೋಲಿಕ ಧರ್ಮಕ್ಷೇತ್ರಗಳಿಂದ 4,200ಕ್ಕೂ ಹೆಚ್ಚು ಯುವಜನರನ್ನು ಒಟ್ಟುಗೂಡಿಸಿದೆ.
ಆರಂಭಿಕ ಪವಿತ್ರ ದಿವ್ಯಬಲಿಪೂಜೆಯ ಸಮಯದಲ್ಲಿ, ಎಂಬೆಯಾ ಮಹಾಧರ್ಮಕ್ಷೇತ್ರಗಳು ಮಹಾಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಗೆರ್ವಾಸ್ ನ್ಯಾಸೊಂಗಾರವರು ಪ್ರಬೋಧನೆಯನ್ನು ನೀಡಿದರು ಮತ್ತು ಎಲ್ಲಾ ರೀತಿಯ ಹಿಂಸೆ ಹಾಗೂ ಅನೈತಿಕತೆಯನ್ನು ತಿರಸ್ಕರಿಸುವಂತೆ ಯುವಜನರನ್ನು ಒತ್ತಾಯಿಸಿದರು.
ಅವರು ಕೊಲೆ, ಅಪಹರಣ, ಚಿತ್ರಹಿಂಸೆ ಮತ್ತು ಇತರ ಸಾಮಾಜಿಕ ಅನ್ಯಾಯಗಳನ್ನು ಖಂಡಿಸಿದರು ಮತ್ತು ಈ ಅಪರಾಧಗಳನ್ನು ಹೆಚ್ಚಾಗಿ ಇತರರಿಂದ ಪ್ರಭಾವಿತರಾದ ಅಥವಾ ನಿರ್ದೇಶಿಸಲ್ಪಟ್ಟ ಕಾರ್ಯಗಳನ್ನು ಯುವಕರು ಮಾಡುತ್ತಾರೆ ಎಂದು ಒತ್ತಿ ಹೇಳಿದರು.
ಕಾನೂನುಬಾಹಿರ ಆದೇಶಗಳನ್ನು ಕುರುಡಾಗಿ ಅನುಸರಿಸುವುದರ ವಿರುದ್ಧ ಮಹಾಧರ್ಮಾಧ್ಯಕ್ಷರು ಎಚ್ಚರಿಸಿದರು ಮತ್ತು ಬಾಹ್ಯ ಒತ್ತಡಗಳು ಏನೇ ಇರಲಿ, ಯುವ ಕಥೊಲಿಕರು ನೈತಿಕ ಸಮಗ್ರತೆಯನ್ನು ಎತ್ತಿಹಿಡಿಯುವ ಕರ್ತವ್ಯವನ್ನು ನೆನಪಿಸಿದರು.
ಕೊಲೆ ಅಥವಾ ಅಪಹರಣಗಳಲ್ಲಿ ಭಾಗವಾಗಬೇಡಿ. ಇನ್ನೊಬ್ಬ ವ್ಯಕ್ತಿಯ ಜೀವವನ್ನು ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಮಹಾಧರ್ಮಾಧ್ಯಕ್ಷರಾದ ನ್ಯಾಸಿಸೊಂಗಾರವರು ಹೇಳಿದರು. ಮುಗ್ಧ ಜನರು ಕೊಲ್ಲಲ್ಪಡುವುದನ್ನು ನೋಡುವುದು ಬೇಸರದ ಸಂಗತಿ. ಈ ಕೃತ್ಯಗಳಲ್ಲಿ ಹೆಚ್ಚಿನವು ವಯಸ್ಸಾದವರಲ್ಲ, ಬದಲಾಗಿ ಯುವಕರಿಂದಲೇ ಮಾಡಲ್ಪಡತ್ತಿವೆ. ನಿಮಗೆ ಹಾಗೆ ಮಾಡಲು ಹೇಳಿದರೂ, ಅಪರಾಧಕ್ಕೆ ನೀವೇ ಹೊಣೆ. ಅದು ಕುರುಡು ವಿಧೇಯತೆ, ಮತ್ತು ಅದು ಬುದ್ಧಿವಂತಿಕೆಯಲ್ಲ.
2025ರ ಭ್ರಷ್ಟಾಚಾರವನ್ನು ತಿರಸ್ಕರಿಸಲು ನೀಡಿದ ಕರೆ
2025ರ ಅಕ್ಟೋಬರ್ 29 ರಂದು ತಂಜಾನಿಯಾದ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಲಂಚ, ವಂಚನೆ, ಕಳ್ಳತನ ಮತ್ತು ತಾರತಮ್ಯದಲ್ಲಿ ತೊಡಗಿಸಿಕೊಳ್ಳದಂತೆ ಮಹಾಧರ್ಮಾಧ್ಯಕ್ಷರಾದ ನ್ಯಾಸಿಸೋಂಗಾರವರು ಯುವಕರಿಗೆ ಎಚ್ಚರಿಕೆ ನೀಡಿದರು. ನ್ಯಾಯಯುತ ಸಮಾಜವನ್ನು ಸೃಷ್ಟಿಸುವಲ್ಲಿ ಯುವಜನರು ಹೊಂದಿರುವ ಪ್ರಮುಖ ಪಾತ್ರವನ್ನು ಅವರು ಒತ್ತಿ ಹೇಳಿದರು ಮತ್ತು ರಾಜಕೀಯ ಭ್ರಷ್ಟಾಚಾರಕ್ಕೆ ಸಾಧನಗಳಾಗುವುದರ ವಿರುದ್ಧ ಎಚ್ಚರಿಕೆ ನೀಡಿದರು.
ಜೀವನದ ಮೌಲ್ಯ ಮತ್ತು ನೈತಿಕ ಜವಾಬ್ದಾರಿಯ ಮೇಲೆ ಒತ್ತು
ಮಹಾಧರ್ಮಾಧ್ಯಕ್ಷರಾದ ನ್ಯಾಸೊಂಗಾರವರು ಯುವಜನರಿಗೆ ಆಧ್ಯಾತ್ಮಿಕ ಅರಿವಿನೊಂದಿಗೆ ಬದುಕಲು ಮತ್ತು ತಮ್ಮ ದೈನಂದಿನ ಜೀವನದಲ್ಲಿ ಬುದ್ಧಿವಂತಿಕೆಯ, ನೈತಿಕ ಆಯ್ಕೆಗಳನ್ನು ಮಾಡಲು ಸವಾಲು ಹಾಕಿದರು. ಅವರು ಜೀವನದ ಘನತೆಯನ್ನು ಎತ್ತಿಹಿಡಿಯಲು ಮತ್ತು ತಮ್ಮ ಸ್ವಂತ ಹಾಗೂ ಇತರರ ಆತ್ಮಸಾಕ್ಷಿಯ ಬಗ್ಗೆ ಜಾಗರೂಕರಾಗಿರಲು ಅವರನ್ನು ಪ್ರೋತ್ಸಾಹಿಸಿದರು.