MAP

Aftermath of a Russian drone and missile attack in Lviv Aftermath of a Russian drone and missile attack in Lviv 

ಮಹಾಧರ್ಮಾಧ್ಯಕ್ಷ-ಗುಡ್ಜಿಯಾಕ್:-ಉಕ್ರೇನ್‌ನೊಂದಿಗೆ-ಶಿಲುಬೆಯ-ಹಾದಿಯ-ಪಥದಲ್ಲಿ

ಉಕ್ರೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆಯ ಫಿಲಡೆಲ್ಫಿಯಾದ ಮಹಾಧರ್ಮಾಧ್ಯಕ್ಷರಾದ ಮೆಟ್ರೋಪಾಲಿಟನ್ ಬೋರಿಸ್ ಗುಡ್ಜಿಯಾಕ್ ರವರು, ಧರ್ಮಸಭೆಯು ಹೇಗೆ ಬಳಲುತ್ತಿರುವ ಉಕ್ರೇನಿಯದವರೊಂದಿಗೆ ಸಹಕರಿಸುತ್ತಿದೆ, ಸಭಾಪಾಲಕರ ಆರೈಕೆ, ಮಾನವೀಯ ಬೆಂಬಲ ಮತ್ತು ಯುದ್ಧದ ಮಧ್ಯೆ ನಂಬಿಕೆಯ ಸಾಕ್ಷಿಯನ್ನು ಒದಗಿಸುತ್ತದೆ ಎಂಬುದರ ಕುರಿತು ಮಾತನಾಡುತ್ತಾರೆ.

ಲಿಂಡಾ ಬೋರ್ಡೋನಿ ಮತ್ತು ಡೆವಿನ್ ವಾಟ್ಕಿನ್ಸ್

ಉಕ್ರೇನ್ ನಿರಂತರ ಬಾಂಬ್ ದಾಳಿಗಳು ಮತ್ತು ದೀರ್ಘಕಾಲದ ಯುದ್ಧದ ಆಘಾತವನ್ನು ಸಹಿಸಿಕೊಂಡಾಗ, ಉಕ್ರೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆಯು ತನ್ನ ಜನರೊಂದಿಗೆ ದೇಶ ಮತ್ತು ವಿದೇಶಗಳಲ್ಲಿ ಸ್ಥಿರವಾದ ಉಪಸ್ಥಿತಿಯಾಗಿ ಉಳಿದಿದೆ.

ವ್ಯಾಟಿಕನ್ ಸುದ್ಧಿಯವರೊಂದಿಗೆ ಮಾತನಾಡಿದ ಅವರು, ಅಮೇರಿಕದಲ್ಲಿರುವ ಉಕ್ರೇನಿಯದ ಕಥೋಲಿಕರಿಗಾಗಿ ಫಿಲಡೆಲ್ಫಿಯಾದ ಮಹಾಧರ್ಮಪ್ರಾಂತ್ಯದ ಮೆಟ್ರೋಪಾಲಿಟನ್ ಮಹಾಧರ್ಮಾಧ್ಯಕ್ಷರಾದ ಬೋರಿಸ್ ಗುಡ್ಜಿಯಾಕ್ ರವರು, ಬಹಳ ಸಂಕಟದ ಸಮಯದಲ್ಲಿ ಧರ್ಮಸಭೆಯು ಎದುರಿಸುತ್ತಿರುವ ಸವಾಲುಗಳು ಮತ್ತು ಭರವಸೆಗಳನ್ನು ಎತ್ತಿ ತೋರಿಸುತ್ತಾರೆ.

ಒಂದರ್ಥದಲ್ಲಿ ಹೇಳುವುದಾದರೆ ಧರ್ಮಾಧ್ಯಕ್ಷರುಗಳು ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ, ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ವಾಸ್ತವವಾಗಿ, ಧರ್ಮಾಧ್ಯಕ್ಷರುಗಳು ಜನರೊಂದಿಗೆ ಇರುತ್ತಾರೆ ಮತ್ತು ಒಂದು ಸಮುದಾಯವು ನೋವಿನಲ್ಲಿದ್ದಾಗ ಧರ್ಮಾಧ್ಯಕ್ಷರುಗಳು ಅವರ ಕಷ್ಟ ದುಃಖದಲ್ಲಿ ಭಾಗಿಯಾಗುತ್ತಾರೆ ಇದು ಅತ್ಯಂತ ಮುಖ್ಯವಾದ ವಿಷಯ ಎಂದು ಅವರು ವಿವರಿಸುತ್ತಾರೆ: ನೀವು ಕಷ್ಟದಲ್ಲಿರುವಾಗ ಒಗ್ಗಟ್ಟಾಗಿ ಹೊಂದಿರುವುದಕ್ಕಿಂತ ಮುಖ್ಯವಾದುದು ಬೇರಾವುದೂ ಇಲ್ಲ.

ಸ್ಥಳಾಂತರದಿಂದ ತೀವ್ರವಾಗಿ ಪ್ರಭಾವಿತವಾದ ರಾಷ್ಟ್ರದ ಬಗ್ಗೆ ಮಹಾಧರ್ಮಾಧ್ಯಕ್ಷರಾದ ಗುಡ್ಜಿಯಾಕ್ ರವರು ವಿವರಿಸುತ್ತಾರೆ. 2022ರಲ್ಲಿ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದಾಗಿನಿಂದ, ಸುಮಾರು 14 ಮಿಲಿಯನ್ ಉಕ್ರೇನಿಯದವರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಕೆಲವರು ಹಿಂತಿರುಗಿದ್ದರೂ, ಅನೇಕರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಅಥವಾ ವಿದೇಶದಲ್ಲಿ ನೆಲೆಸಿದ್ದಾರೆ, ಅವರು ಹಿಂತಿರುಗಿದರೂ ಅಲ್ಲಿ ತಂಗಲು ಯಾವುದೇ ಮನೆಗಳು ಉಳಿದಿಲ್ಲ.

ಈ ಸಂದರ್ಭದಲ್ಲಿ, ಧರ್ಮಸಭೆಯು ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. "ನಾವು ಜನರೊಂದಿಗೆ ಮತ್ತು ಜನರಿಗಾಗಿ ಪ್ರಾರ್ಥಿಸಲು ಪ್ರಯತ್ನಿಸುತ್ತೇವೆ, ಏನಾಗುತ್ತಿದೆ ಎಂಬುದನ್ನು ವಿವರಿಸಲು, ಶಿಲುಬೆಯ ಹಾದಿಯಲ್ಲಿ ಸಂತ್ರಸ್ತರುಗಳೊಂದಿಗೆ ಸಾಗಲು" ಹೇಳುತ್ತಿದೆ. ವಿಶ್ವದಲ್ಲಿರುವ ಎಲ್ಲರಿಗೂ ತಿಳಿದಿದೆ ಯಾರನ್ನು ಕೊಲ್ಲಲಾಗಿದೆ, ಯಾರನ್ನು ನಿರಾಶ್ರಿತರನ್ನಾಗಿಸಿದೆ ಎಂದು ತಿಳಿದಿದೆ. ಇದು ಸಾರ್ವತ್ರಿಕ ಅನುಭವವಾಗಿದೆ.

ಧರ್ಮಸಭೆಯು ತನ್ನ ಯಾಜಕರನ್ನು ಮತ್ತು ಧಾರ್ಮಿಕರ ಜಾಲದ ಮೂಲಕ ಆಶ್ರಯ, ಆಹಾರ, ಬಟ್ಟೆ, ಮಾನಸಿಕ ಬೆಂಬಲ ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸುತ್ತಿದೆ ಎಂದು ಮಹಾಧರ್ಮಾಧ್ಯಕ್ಷರಾದ ಗುಡ್ಜಿಯಾಕ್ ರವರು ವಿವರಿಸುತ್ತಾರೆ. ನಂತರದ ಆಘಾತಕಾರಿ ಒತ್ತಡದ ಅಸ್ವಸ್ಥತೆಯನ್ನು ಗುರುತಿಸಲು ಮತ್ತು ಪ್ರತಿಕ್ರಿಯಿಸಲು ಯಾಜಕರಿಗೆ ತರಬೇತಿ ನೀಡಲಾಗುತ್ತಿದೆ, ಮುಂಬರುವ ವರ್ಷಗಳಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇದರಿಂದ ಪ್ರಭಾವಿತರಾಗುವ ನಿರೀಕ್ಷೆಯಿದೆ.
 

13 ಜುಲೈ 2025, 19:24