ಘಾನಾದ ಗಡಿಯಲ್ಲಿ ವಲಸಿಗರು ಮತ್ತು ನಿರಾಶ್ರಿತರಿಗೆ ಸೇವೆ ಸಲ್ಲಿಸುತ್ತಿರುವ ಕನ್ಯಾಭಗಿನಿಯರು
ಸಿಸ್ಟರ್. ಆಗ್ನೆಸ್ ಮರ್ಸಿ ನ್ಯಾಟ್ಸೋ, SMMC
ಸಿಸ್ಟರ್. ಮೇರಿ-ಕನ್ಸೊಲಾಟಾ ಸೆರ್ವಾ ನ್ಟೆನ್ಯೆರವರ ಪ್ರಯಾಣವು ಅಂಚಿನಲ್ಲಿರುವ ಮತ್ತು ದುರ್ಬಲರಿಗೆ ಸೇವೆ ಸಲ್ಲಿಸುವ ದೈವಕರೆಯೊಂದಿಗೆ ಪ್ರಾರಂಭವಾಯಿತು. ಆ ದೈವಕರೆಯು ಆಕೆಯನ್ನು ದಕ್ಷಿಣ ಘಾನಾದ ಗಡಿ ಪಟ್ಟಣ ಮತ್ತು ವಲಸಿಗರು ಹಾಗೂ ನಿರಾಶ್ರಿತರಿಗೆ ಪ್ರಮುಖ ಪ್ರವೇಶ ಬಿಂದುವಾದ ಆಫ್ಲಾವೊಗೆ ಕರೆತಂದಿತು. ಅಲ್ಲಿ, ಸಿಸ್ಟರ್ಸ್ ಆಫ್ ಮೇರಿ ಮದರ್ ಆಫ್ ದಿ ಚರ್ಚ್ (SMMC) ವಲಸೆಗಾರರು ಮತ್ತು ನಿರಾಶ್ರಿತರ ನೆರವಿನ ಸಂಪರ್ಕ ಕಾರ್ಯಕ್ರಮವನ್ನು ಪ್ರಾರಂಭಿಸಿತು.
ಟೋಗೊ-ಘಾನಾ ಗಡಿಯ ಬಳಿಯಿರುವ ಆಫ್ಲಾವ್, ಕೋಟ್ ಡಿ'ಐವೊಯಿರ್, ಬುರ್ಕಿನಾ ಫಾಸೊ ಮತ್ತು ಟೋಗೊ ಸೇರಿದಂತೆ ದೇಶಗಳಿಂದ ಹೆಚ್ಚಿನ ಸಂಖ್ಯೆಯ ನಿರಾಶ್ರಿತರನ್ನು ಹೊಂದಿದೆ. ಅಫ್ಲಾವ್ ಘೆಟ್ಟೋ ಆಶ್ರಯ ಮತ್ತು ಸಂಕಷ್ಟಗಳ ಸ್ಥಳವಾಗಿದೆ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಮೂಲಭೂತ ಸೇವೆಗಳಿಗೆ ಸೀಮಿತ ಪ್ರವೇಶದಿಂದ ಗುರುತಿಸಲ್ಪಟ್ಟಿದೆ.
ಸಿಸ್ಟರ್ಸ್ ಆಫ್ ಮೇರಿ ಮದರ್ ಆಫ್ ದಿ ಚರ್ಚ್̲ನ (SMMC) ಕಾರ್ಯಕ್ರಮವು ಪ್ರಾಯೋಗಿಕ ಬೆಂಬಲದೊಂದಿಗೆ ಈ ಅಗತ್ಯಗಳನ್ನು ಪೂರೈಸುತ್ತದೆ. ಸಂಯೋಜಕರಾಗಿ, ಸಿಸ್ಟರ್. ಮೇರಿ-ಕನ್ಸೊಲಾಟಾ ರವರು ಸ್ಥಳಾಂತರಗೊಂಡ ಜನರಿಗೆ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಜೀವನೋಪಾಯದ ಮೇಲೆ ಕೇಂದ್ರೀಕರಿಸುವ ಉಪಕ್ರಮಗಳನ್ನು ಪೂರೈಸುವ ಕಾರ್ಯಕ್ರಮವನ್ನು ಮುನ್ನಡೆಸಿದ್ದಾರೆ.
ಆರೋಗ್ಯ ಸೇವೆಯ ಲಭ್ಯತೆಯು ಒಂದು ಪ್ರಮುಖ ಆದ್ಯತೆಯಾಗಿದೆ
ಅನೇಕ ನಿರಾಶ್ರಿತರು ಮತ್ತು ವಲಸಿಗರಿಗೆ ವೈದ್ಯಕೀಯ ಆರೈಕೆಯ ಕೊರತೆಯಿದೆ, ಅಸ್ಥಿರ ಜೀವನ ಪರಿಸ್ಥಿತಿಗಳಿಂದ ಈ ಸಮಸ್ಯೆ ಇನ್ನಷ್ಟು ಹದಗೆಟ್ಟಿದೆ ಎಂದು ಅವರು ಹೇಳಿದರು. ಅವರು ಸ್ಥಳೀಯ ಚಿಕಿತ್ಸಾಲಯಗಳು ಮತ್ತು ಸ್ವಯಂಸೇವಕರೊಂದಿಗೆ ಕೆಲಸ ಮಾಡಿ ಉಚಿತ ಸಮಾಲೋಚನೆಗಳು, ಅಗತ್ಯ ಔಷಧಿಗಳು ಮತ್ತು ಅನಾರೋಗ್ಯವನ್ನು ತಡೆಗಟ್ಟುವ ಹಾಗೂ ಬಾಲ್ಯದ ಆರೈಕೆಯ ಕುರಿತು ಶಿಕ್ಷಣವನ್ನು ಒದಗಿಸುತ್ತಿದ್ದಾರೆ.
ಶಿಕ್ಷಣ
ಸಿಸ್ಟರ್ ಮೇರಿ-ಕನ್ಸೊಲಾಟಾರವರು ನಿರಾಶ್ರಿತರು ಮತ್ತು ವಲಸೆ ಸಮುದಾಯಗಳಲ್ಲಿ ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರಿಗೆ ಕಲಿಕಾ ಕಾರ್ಯಕ್ರಮಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾರೆ. ಈ ಕಾರ್ಯಕ್ರಮಗಳು ಮಕ್ಕಳನ್ನು ಔಪಚಾರಿಕ ಶಿಕ್ಷಣಕ್ಕೆ ಸಿದ್ಧಪಡಿಸುವುದು ಮತ್ತು ವಯಸ್ಕರನ್ನು ಉದ್ಯೋಗಕ್ಕೆ ಯೋಗ್ಯವಾದ ರೀತಿಯ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿವೆ. ನಿರಾಶ್ರಿತರ ಮಕ್ಕಳು ಶಿಕ್ಷಣ ವ್ಯವಸ್ಥೆಯಿಂದ ಹೊರಗಿಡಲ್ಪಡದಂತೆ ನೋಡಿಕೊಳ್ಳಲು ಅವರು ಸ್ಥಳೀಯ ಶಾಲೆಗಳೊಂದಿಗೆ ಸಹಕರಿಸುತ್ತಾರೆ.
ಮಾನವ ಹಕ್ಕು
ಸೇವೆಗಳ ಹೊರತಾಗಿ, ಈ ಕಾರ್ಯಕ್ರಮವು ವಲಸಿಗರು ಮತ್ತು ನಿರಾಶ್ರಿತರ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ಸಿಸ್ಟರ್ ಮೇರಿ-ಕನ್ಸೊಲಾಟಾರವರು ಶೋಷಣೆ, ತಾರತಮ್ಯ ಮತ್ತು ಕಾನೂನು ರಕ್ಷಣೆಗಳ ನಿರಾಕರಣೆಯ ವಿರುದ್ಧ ಮಾತನಾಡುತ್ತಾರೆ. ಅವರ ಕೆಲಸವು ಸ್ಥಳಾಂತರಗೊಂಡ ಜನರು ಎದುರಿಸುವ ಸವಾಲುಗಳು ಮತ್ತು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಅವರಿಗೆ ಇರುವ ರಕ್ಷಣೆಗಳನ್ನು ಎತ್ತಿ ತೋರಿಸುತ್ತದೆ. ಈ ಉಪಕ್ರಮವು ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕ್ಯಾಸ್ಟರಿಯಿಂದ ಬೆಂಬಲವನ್ನು ಪಡೆಯುತ್ತಿದೆ, ಇದು ಅಂಚಿನಲ್ಲಿರುವ ಜನಸಂಖ್ಯೆಯೊಂದಿಗೆ ಕೆಲಸ ಮಾಡಲು ಆರ್ಥಿಕ ನೆರವನ್ನು ಒದಗಿಸುತ್ತಿದೆ.
ಸಮುದಾಯದ ಒಗ್ಗಟ್ಟು
ಈ ಕಾರ್ಯಕ್ರಮವು ನಿರಾಶ್ರಿತರು, ವಲಸಿಗರು ಮತ್ತು ಸ್ಥಳೀಯ ಘಾನಾ ಸಮುದಾಯದ ನಡುವೆ ಏಕತೆಯನ್ನು ಉತ್ತೇಜಿಸುತ್ತದೆ. ಸಂವಾದ ಮತ್ತು ಜಂಟಿ ಯೋಜನೆಗಳು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಹಾಗೂ ಸಾಮಾಜಿಕ ಒಗ್ಗಟ್ಟನ್ನು ನಿರ್ಮಿಸುವ ಗುರಿಯನ್ನು ಹೊಂದಿವೆ. ಸಿಸ್ಟರ್ ಮೇರಿ-ಕನ್ಸೊಲಾಟಾರವರ ಪ್ರಯತ್ನಗಳು ಸುಸ್ಥಿರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತವೆ, ವ್ಯಕ್ತಿಗಳು ಸ್ವಾವಲಂಬಿಗಳಾಗಲು ಮತ್ತು ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಹಾಯ ಮಾಡುತ್ತವೆ.
ಮುಂದಿರುವ ಸವಾಲುಗಳು
ಪ್ರಗತಿಯ ಹೊರತಾಗಿಯೂ, ಕಾರ್ಯಕ್ರಮವು ನಿರ್ಬಂಧಗಳನ್ನು ಎದುರಿಸುತ್ತಿದೆ. "ನಿರಾಶ್ರಿತರು ಮತ್ತು ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದು ಸಂಪನ್ಮೂಲಗಳನ್ನು ಕುಂಠಿತಗೊಳಿಸಿದೆ" ಎಂದು ಸಿಸ್ಟರ್ ಮೇರಿ-ಕನ್ಸೊಲಾಟಾರವರು ಹೇಳಿದರು. ಸೀಮಿತ ಹಣಕಾಸು, ಕಳಪೆ ಮೂಲಸೌಕರ್ಯ ಮತ್ತು ಈ ಪ್ರದೇಶದಲ್ಲಿನ ಅಸ್ಥಿರತೆಯು ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತಿದೆ. ಆದಾಗ್ಯೂ, ಅವರು ಸಂಪರ್ಕವನ್ನು ವಿಸ್ತರಿಸಲು ಮತ್ತು ನೆಲದ ಅಗತ್ಯಗಳಿಗೆ ಸ್ಪಂದಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಬದ್ಧರಾಗಿದ್ದಾರೆ.