MAP

CELAM bishops send the MAPa letter, inviting him to visit the region CELAM bishops send the MAPa letter, inviting him to visit the region 

CELAM ವಿಶ್ವಗುರು ಹದಿನಾಲ್ಕನೇ ಲಿಯೋರವರಿಗೆ ಪತ್ರವನ್ನು ಕಳುಹಿಸಿ, ಭೇಟಿ ಮಾಡಲು ಆಹ್ವಾನಿಸುತ್ತಿದೆ

ವಿಶ್ವಗುರು ಹದಿನಾಲ್ಕನೇ ಲಿಯೋರವರು CELAM ಧರ್ಮಾಧ್ಯಕ್ಷಕರುಗಳಿಗೆ ಟೆಲಿಗ್ರಾಮ್ ಕಳುಹಿಸಿದ ಎರಡು ದಿನಗಳ ನಂತರ, ಅವರು ಅವರ ವಿಶ್ವಗುರು ಹುದ್ದೆಗೆ ತಮ್ಮ ಬದ್ಧತೆಯನ್ನು ಹಂಚಿಕೊಂಡರು ಮತ್ತು ಅವರ ಆಯ್ಕೆಯನ್ನು "ಭರವಸೆಯ ಸಂಕೇತ" ಎಂದು ಕರೆದರು.

ಕೀಲ್ಸ್ ಗುಸ್ಸಿ

ತಮ್ಮ 40ನೇ ಸಾಮಾನ್ಯ ಸಭೆಯನ್ನು ಆಚರಿಸುತ್ತಾ, ಲತೀನ್ ಅಮೇರಿಕದ ಮತ್ತು ಕೆರಿಬಿಯದ ಧರ್ಮಾಧ್ಯಕ್ಷಕರುಗಳ ಸಮ್ಮೇಳನವು (CELAM) ವಿಶ್ವಗುರು ಹದಿನಾಲ್ಕನೇ ಲಿಯೋರವರಿಗೆ ಪತ್ರವನ್ನು ಕಳುಹಿಸಿತು. ಅದರಲ್ಲಿ, ಅವರು ಸಂತ ಪೇತ್ರರವರ 266ನೇ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ ಮತ್ತು ಎರಡು ದಿನಗಳ ಹಿಂದೆ ಅವರು ಸಾಮಾನ್ಯ ಸಭೆಗೆ ಕಳುಹಿಸಿದ ಟೆಲಿಗ್ರಾಮ್‌ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.

"ರಿಯೊ ಡಿ ಜನೈರೊದಲ್ಲಿ ಒಟ್ಟುಗೂಡಿದ ಲತೀನ್ ಅಮೇರಿಕದ ಮತ್ತು ಕೆರಿಬಿಯದ ಧರ್ಮಾಧ್ಯಕ್ಷಕರುಗಳ ಸಮ್ಮೇಳನವು (CELAM) ನ 40ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ನಾವು, ಸಂತೋಷದಿಂದ ತುಂಬಿದ ಹೃದಯಗಳಿಂದ, ನಮ್ಮ ಸಹೋದರರಿಗೆ ಶುಭಾಶಯಗಳನ್ನು ಮತ್ತು ನಮ್ಮ ಧರ್ಮಾಧ್ಯಕ್ಷಕ ಸೇವೆಯನ್ನು ಪ್ರೋತ್ಸಾಹಿಸಿದ ಸಂದೇಶಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ನಿಮಗೆ ಕಳುಹಿಸುತ್ತೇವೆ."

ವಿಶ್ವಗುರು ಹದಿನಾಲ್ಕನೇ ಲಿಯೋರವವರ ಆಯ್ಕೆಯು ಭರವಸೆಯ ಸಂಕೇತವಾಗಿದೆ
ವಿಶ್ವಗುರುವಿಗೆ ನೀಡಿದ ಸಂದೇಶದಲ್ಲಿ, CELAM ಧರ್ಮಾಧ್ಯಕ್ಷಕರುಗಳು ಅವರ ಆಯ್ಕೆಯಲ್ಲಿ "ದೇವರ ದೈವಿಕ ಕೆಲಸವನ್ನು" ನೋಡುತ್ತೇವೆ ಎಂದು ಹೇಳಿದ್ದಾರೆ. ಫ್ರಾನ್ಸಿಸ್ ರವರ ವಿಶ್ವಗುರುವಿನ ಹುದ್ದೆಯ ಫಲಗಳ ಹಿನ್ನೆಲೆಯಲ್ಲಿ, ಪತ್ರವು "ನಿಮ್ಮ ಆಯ್ಕೆಯು ಭರವಸೆಯ ಸಂಕೇತವಾಗಿದೆ" ಎಂದು ಮುಂದುವರೆಯಿತು.

ಧರ್ಮಾಧ್ಯಕ್ಷಕರುಗಳು ವಿಶ್ವಗುರುವಿನೊಂದಿಗಿನ ತಮ್ಮ "ಪೂರ್ಣ ಮತ್ತು ಪುತ್ರ ಸಂಬಂಧದ" ನವೀಕರಣವನ್ನು ದೃಢಪಡಿಸಿದರು ಮತ್ತು ಧರ್ಮಸಭೆಯಲ್ಲಿ ಧರ್ಮಪ್ರಚಾರಕರಾಗಿ ಸೇವೆ ಸಲ್ಲಿಸುವ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು. ಧರ್ಮಸಭೆಯ ಸೇವಕರಾಗಿರುವ ನಾವು ಈ ಸವಾಲನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ, ಇದು ಪರಿಧಿಯಿಂದ ಕೇಂದ್ರವನ್ನು ಸರಳತೆಯ ಸ್ಥಳದ ದೃಢೀಕರಣದೊಂದಿಗೆ ಶ್ರೀಮಂತಗೊಳಿಸುತ್ತದೆ ಎಂದು ಘೋಷಿಸುತ್ತದೆ.

ಲತೀನ್ ಅಮೆರಿಕ ಮತ್ತು ಕೆರಿಬಿಯವನ್ನು ಮರೆಯಬೇಡಿ
CELAM ಧರ್ಮಾಧ್ಯಕ್ಷಕರುಗಳು ತಮ್ಮ 40ನೇ ಸಾಮಾನ್ಯ ಸಭೆಯನ್ನು ನಡೆಸುತ್ತಿರುವಾಗ, ಅವರು 1955 ರಲ್ಲಿ ರಿಯೊ ಡಿ ಜನೈರೊದಲ್ಲಿ ಲತೀನ್ ಅಮೆರಿಕದ ಧರ್ಮಾಧ್ಯಕ್ಷಕರುಗಳು ಮೊದಲ ಸಾಮಾನ್ಯ ಸಮ್ಮೇಳನದ 70ನೇ ವಾರ್ಷಿಕೋತ್ಸವವನ್ನು ಸಹ ಸ್ಮರಿಸುತ್ತಿದ್ದಾರೆ. ಇದರ ಬೆಳಕಿನಲ್ಲಿ, ಧರ್ಮಾಧ್ಯಕ್ಷರುಗಳು ಶುಭಸಂದೇಶದ ಬೋಧನೆಗೆ ತಮ್ಮ ಸಮರ್ಪಣೆಯನ್ನು ಪುನರುಚ್ಚರಿಸಿದರು.

ಧರ್ಮಾಧ್ಯಕ್ಷರುಗಳು ಈ ಪ್ರದೇಶದ ಸವಾಲಿನ ಸಾಮಾಜಿಕ-ರಾಜಕೀಯ ವಾಸ್ತವವನ್ನು ಎತ್ತಿ ತೋರಿಸಿದರು, ವಿಶ್ವಗುರುಗಳ "ನ್ಯಾಯ ಮತ್ತು ಶಾಂತಿಯನ್ನು ಪ್ರೇರೇಪಿಸಲು ಪ್ರವಾದಿಯ ಧ್ವನಿ" ಇಲ್ಲಿ ಅಗತ್ಯವಿದೆ ಎಂದು ಹೇಳಿದರು. ಕುಟುಂಬಗಳು ಮತ್ತು ಸಮುದಾಯಗಳು ಸಶಸ್ತ್ರ ಸಂಘರ್ಷ, ಮಾದಕವಸ್ತು ಕಳ್ಳಸಾಗಣೆ ಮತ್ತು ಬಲವಂತದ ವಲಸೆಯನ್ನು ಎದುರಿಸುತ್ತಿರುವಾಗ, ಸಭೆಯು ವಿಶ್ವಗುರು ಹದಿನಾಲ್ಕನೇ ಲಿಯೋರವರ ಪ್ರಾರ್ಥನೆಯಲ್ಲಿ ಈ ಪ್ರದೇಶವನ್ನು ನೆನಪಿಸಿಕೊಳ್ಳುವಂತೆ ಮನವಿ ಮಾಡಿತು.

ಧರ್ಮಾಧ್ಯಕ್ಷಕರುಗಳ ಪತ್ರವು ಧರ್ಮಸಭೆಯ ಧರ್ಮಪ್ರಚಾರಕ ಮತ್ತು ಸಿನೊಡಲ್ ಧ್ಯೇಯವನ್ನು ಮುಂದುವರೆಸುವ ಅವರ ನಿರಂತರ ಬದ್ಧತೆಯನ್ನು ಒತ್ತಿಹೇಳಿತು ಮತ್ತು ಲೌಡಾಟೊ ಸಿ' ಪರಂಪರೆಯನ್ನು ಅನುಸರಿಸಿ ಇಡೀ ಸೃಷ್ಟಿಯನ್ನು ನೋಡಿಕೊಳ್ಳುವ ಅವರ ಸಮರ್ಪಣೆಯನ್ನು ಒತ್ತಿಹೇಳಿತು.

ತಮ್ಮ ಪತ್ರವನ್ನು ಮುಕ್ತಾಯಗೊಳಿಸುತ್ತಾ, ಧರ್ಮಾಧ್ಯಕ್ಷಕರುಗಳು ವಿಶ್ವಗುರು ಹದಿನಾಲ್ಕನೇ ಲಿಯೋರವರನ್ನು "ನಮ್ಮ ಜನರು ನಿಮ್ಮ ಉಪಸ್ಥಿತಿ ಮತ್ತು ಪ್ರೇಷಿತ ಉತ್ತರಾಧಿಕಾರಿಯ ಆಶೀರ್ವಾದಕ್ಕಾಗಿ ಹಾತೊರೆಯುತ್ತಿರುವುದರಿಂದ" ಸಾಧ್ಯವಾದಾಗಲೆಲ್ಲಾ ಲತೀನ್ ಅಮೆರಿಕ ಮತ್ತು ಕೆರಿಬಿಯನ್‌ಗೆ ಭೇಟಿ ನೀಡಲು ಔಪಚಾರಿಕವಾಗಿ ಆಹ್ವಾನಿಸುತ್ತೇವೆ.
 

30 ಮೇ 2025, 10:23