ಜೆರುಸಲೇಮ್ನಲ್ಲಿರುವ ದೇವಾಲಯಗಳು: ಗಾಜಾಗೆ ಸ್ಥಳಾಂತರ ಯೋಜನೆ ಅಮಾನವೀಯವಾಗಿದೆ
ಲಿಸಾ ಝೆಂಗಾರಿನಿ
ಗಾಜಾದಲ್ಲಿರುವ ಪ್ಯಾಲೆಸ್ತೀನಿಯದವರನ್ನು ಇತರ ದೇಶಗಳಿಗೆ ಸ್ಥಳಾಂತರಿಸುವ ಅಧ್ಯಕ್ಷ ಟ್ರಂಪ್ ರವರ ಯೋಜನೆಯ ವಿರುದ್ಧ, ವಿಶ್ವದ ಆಕ್ರೋಶಕ್ಕೆ ಜೆರುಸಲೇಮ್ನ ಕುಲಪತಿಗಳು ಮತ್ತು ದೇವಾಲಯಗಳ ಮುಖ್ಯಸ್ಥರು ತಮ್ಮ ಧ್ವನಿಯನ್ನು ಸೇರಿಸಿದ್ದಾರೆ, ಪ್ರಸ್ತಾವಿತ ಸಾಮೂಹಿಕ ಸ್ಥಳಾಂತರವು "ಮಾನವ ಘನತೆಯ ಹೃದಯಭಾಗವನ್ನೇ ತಿವಿಯುವಂತಹ ಅನ್ಯಾಯವಿದು" ಎಂದು ಹೇಳಿದ್ದಾರೆ.
ಜೆರುಸಲೇಮ್ನ ಲತೀನ್ ಪಿತೃಪ್ರಧಾನ ಕಾರ್ಡಿನಲ್ ಪಿಯರ್ಬಟಿಸ್ಟಾ ಪಿಜ್ಜಾಬಲ್ಲಾರವರು ಮತ್ತು ಪವಿತ್ರ ನಾಡಿನ ಕಸ್ಟೋಸ್ ಧರ್ಮಗುರು ಫ್ರಾನ್ಸೆಸ್ಕೊ ಪ್ಯಾಟನ್ OFM ಕ್ಯಾಪ್ ರವರು ಸಹಿ ಮಾಡಿದ ದಾಖಲೆಯ ಹೇಳಿಕೆಯಲ್ಲಿ, ಧರ್ಮಸಭೆಯ ನಾಯಕರು, ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾರವರು ಮತ್ತು ಈಜಿಪ್ಟ್ನ ಅಧ್ಯಕ್ಷ ಇಎಲ್-ಸಿಸಿ, ಅವರ ನಿಲುವಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಾರೆ, ಅಧ್ಯಕ್ಷ ಟ್ರಂಪ್ ರವರ ಯೋಜನೆಯನ್ನು ಖಂಡಿಸಿದ್ದಾರೆ.
ಬಲವಂತದ ಗಡಿಪಾರು ಬೇಡ
ಗಾಜಾದ ಜನರು, ತಮ್ಮ ಪೂರ್ವಜರ ನಾಡಿನಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ಕುಟುಂಬಗಳು, ಬಲವಂತವಾಗಿ ಗಡಿಪಾರು ಮಾಡಬಾರದು, ಅವರ ಮನೆಗಳಲ್ಲಿ ಉಳಿದಿರುವ ಯಾವುದೇ ವಸ್ತು, ಅವರ ಪರಂಪರೆ ಮತ್ತು ಅವರ ಗುರುತಿನ ಸಾರವನ್ನು ರೂಪಿಸುವ ನಾಡಿನಲ್ಲಿ ಉಳಿಯುವ ಹಕ್ಕನ್ನು ಕಸಿದುಕೊಳ್ಳಬಾರದು ಅವರು ಹೇಳಿದರು.
ಜೆರುಸಲೇಮ್ನ ಧರ್ಮಸಭೆಯ ಕ್ರೈಸ್ತರಾದ ನಾವು ಗಾಜಾದ ಜನರು ಅನುಭವಿಸುತ್ತಿರುವ ದುಃಖದ ಬಗ್ಗೆ ಅಸಡ್ಡೆ ತೋರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸುತ್ತವೆ, ಏಕೆಂದರೆ "ಶುಭಸಂದೇಶವು ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಎತ್ತಿಹಿಡಿಯಲು ನಮಗೆ ಆಜ್ಞಾಪಿಸುತ್ತದೆ".
ಎಲ್ಲಾ ಸೆರೆಯಾಳುಗಳನ್ನು ಮುಕ್ತಗೊಳಿಸಿ
ಸ್ಥಳಾಂತರವನ್ನು ವಿರೋಧಿಸುವುದರ ಜೊತೆಗೆ, ಸಂಘರ್ಷದಿಂದ ಛಿದ್ರಗೊಂಡ ಅಸಂಖ್ಯಾತ ಕುಟುಂಬಗಳು ಅನುಭವಿಸಿದ ನೋವನ್ನು ಗುರುತಿಸಿ, ಎರಡೂ ಕಡೆಯ ಎಲ್ಲಾ ಸೆರೆಯಾಳುಗಳ ತಕ್ಷಣದ ಬಿಡುಗಡೆಗಾಗಿ ಧರ್ಮಸಭೆಯ ನಾಯಕರು ಪ್ರತಿಪಾದಿಸಿದರು.
ಇದಲ್ಲದೆ, ಗಡಿಯಲ್ಲಿನ ಮಾನವೀಯ ದುರಂತವನ್ನು ತಡೆಯಲು ತ್ವರಿತ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಅವರು ಸರ್ಕಾರಗಳು, ಧಾರ್ಮಿಕ ಸಮುದಾಯಗಳು ಮತ್ತು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸುತ್ತಾರೆ.
ಟ್ರಂಪ್ ರವರ ಸಾಮೂಹಿಕ ಸ್ಥಳಾಂತರ ಯೋಜನೆಗೆ ವಿಶ್ವಾದ್ಯಂತ ತೀವ್ರ ವಿರೋಧ
ಗಾಜಾವನ್ನು "ಸ್ವಾಧೀನಪಡಿಸಿಕೊಳ್ಳುವ" ಮತ್ತು ಪುನರಾಭಿವೃದ್ಧಿ ಮಾಡುವ ಅಧ್ಯಕ್ಷ ಟ್ರಂಪ್ ರವರ ಪ್ರಸ್ತಾಪವು ಹಲವಾರು ವಿಶ್ವ ನಾಯಕರು ಮತ್ತು ವಿಶ್ವಸಂಸ್ಥೆಯಿಂದ ತೀವ್ರ ವಿರೋಧವನ್ನು ಎದುರಿಸಿದೆ, ಇದು ಅಂತರರಾಷ್ಟ್ರೀಯ ಕಾನೂನಿನ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪವಿತ್ರ ಪೀಠಾಧಿಕಾರವು ಮತ್ತು ವಿಶ್ವದಾದ್ಯಂತದ ಧಾರ್ಮಿಕ ಮುಖಂಡರು ಸಹ ಈ ಯೋಜನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಫೆಬ್ರವರಿ 13 ರಂದು ಇಟಲಿಯ ಪವಿತ್ರ ಪೀಠಾಧಿಕಾರದ ರಾಯಭಾರ ಕಚೇರಿಯಲ್ಲಿ ನಡೆದ ಸಮಾರಂಭದ ಹೊರತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಡಿನಲ್ ಕಾರ್ಯದರ್ಶಿ ಪಿಯೆಟ್ರೊ ಪರೋಲಿನ್ ರವರು, ಗಾಜಾದಲ್ಲಿ ಏನಾಗಬೇಕು ಎಂಬುದರ "ಪ್ರಮುಖ ಅಂಶಗಳಲ್ಲಿ" ಒಂದಾದ " ಗಾಜಾದಲ್ಲಿ ಗಡೀಪಾರು ಆಗಲೇಬಾರದು" ಎಂದು ಹೇಳಿದರು. "ಗಾಜಾದಲ್ಲಿ ಹುಟ್ಟಿ-ಬೆಳೆದು ವಾಸಿಸುತ್ತಿರುವ ಯಾರೇ ಆಗಲಿ ಅವರೆಲ್ಲರೂ, ಅವರ ನೆಲದಲ್ಲಿಯೇ ಉಳಿಯಬೇಕು" ಎಂದು ಕಾರ್ಡಿನಲ್ ರವರು ಹೇಳಿದರು, ದೀರ್ಘಕಾಲದಿಂದ ಮುಂದುವರೆಯುತ್ತಿರುವ ಪ್ಯಾಲೆಸ್ತೀನಿಯ-ಇಸ್ರಯೇಲ್ ಸಂಘರ್ಷವನ್ನು ಪರಿಹರಿಸಲು ಎರಡು-ರಾಜ್ಯಗಳ ಪರಿಹಾರಕ್ಕಾಗಿ ವ್ಯಾಟಿಕನ್ನ ದೀರ್ಘಕಾಲದ ಕರೆಯನ್ನು ಪುನರುಚ್ಚರಿಸಿದರು.