ಮ್ಯಾನ್ಮಾರ್ನಲ್ಲಿ ಕ್ರೂರವಾಗಿ ಕೊಲ್ಲಲ್ಪಟ್ಟ ಧರ್ಮಗುರುವಿಗಾಗಿ ಕಾರ್ಡಿನಲ್ ಬೊರವರು ಪ್ರಾರ್ಥಿಸುತ್ತಾರೆ
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಧರ್ಮಗುರು ಡೊನಾಲ್ಡ್ ಮಾರ್ಟಿನ್ ಯೆ ನೈಂಗ್ ವಿನ್ ರವರ ಜೊತೆಗೆ ಅಸಂಖ್ಯಾತ ಮುಗ್ಧ ಜನರ ರಕ್ತ ಮತ್ತು ತ್ಯಾಗಗಳು, ರಾಷ್ಟ್ರದಾದ್ಯಂತ ಮುಂದುವರೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸಲು ಅರ್ಪಣೆಯಾಗಿ ಕಾರ್ಯನಿರ್ವಹಿಸಲಿ.
ಮ್ಯಾನ್ಮಾರ್ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೊರವರು, ಮ್ಯಾನ್ಮಾರ್ನ ಮಿಲಿಟರಿ ಮತ್ತು ಪ್ರತಿರೋಧ ಪಡೆಗಳ ನಡುವಿನ ಸಂಘರ್ಷ ಮುಂದುವರಿದಾಗ ಸಶಸ್ತ್ರ ಗುಂಪಿನಿಂದ ಕೊಲ್ಲಲ್ಪಟ್ಟ ಧರ್ಮಗುರು ಡೊನಾಲ್ಡ್ ಮಾರ್ಟಿನ್ ಯೆ ನೈಂಗ್ ವಿನ್ ರವರ ನಿಧನಕ್ಕೆ ಕಳುಹಿಸಿದ ಸಂತಾಪ ಸಂದೇಶದಲ್ಲಿ ಈ ವಿಷಯವನ್ನು ವ್ಯಕ್ತಪಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಮ್ಯಾನ್ಮಾರ್ನ ಮಿಲಿಟರಿ ಜುಂಟಾ ಬರ್ಮಾದ ವಾಯುವ್ಯ ಚಿನ್ ರಾಜ್ಯದ ಮಿಂಡಾಟ್ನಲ್ಲಿರುವ ಯೇಸುವಿನ ಪವಿತ್ರ ಹೃದಯದ ಕಥೋಲಿಕ ದೇವಾಲಯದ (ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಕ್ಯಾಥೋಲಿಕ್ ಚರ್ಚ್) ಮೇಲೆ ಬಾಂಬ್ ದಾಳಿ ಮಾಡಿತು. ಜನವರಿ 25 ರಂದು ವಿಶ್ವಗುರು ಫ್ರಾನ್ಸಿಸ್ ರವರು ಹೊಸದಾಗಿ ಸ್ಥಾಪಿಸಲಾದ ಮಿಂಡಾಟ್ ಧರ್ಮಕ್ಷೇತ್ರದ ಪ್ರಧಾನಾಲಯವಾಗಿ ಆಯ್ಕೆಯಾದ ದೇವಾಲಯವು ಇದಾಗಿತ್ತು.
ಫೆಬ್ರವರಿ 6 ರಂದು ಧ್ವಂಸಗೊಂಡ ನೂತನ ಪ್ರಧಾನಾಲಯವು, ವೈಮಾನಿಕ ಬಾಂಬ್ ದಾಳಿಯಲ್ಲಿ ಅದರ ಛಾವಣಿ ಮತ್ತು ಬಣ್ಣದ ಗಾಜಿನ ಕಿಟಕಿಗಳಿಗೆ ಹಾನಿಯಾದ ನಂತರ ನಿರುಪಯುಕ್ತವಾಯಿತು. ಬಾಂಬ್ ದಾಳಿಯಲ್ಲಿ ಯಾವುದೇ ಗಾಯಗಳಾಗಿಲ್ಲ, ಏಕೆಂದರೆ ಕಳಪೆ ಭದ್ರತಾ ಪರಿಸ್ಥಿತಿಗಳು ಮತ್ತು ಮುಂದುವರೆಯುತ್ತಿರುವ ಹೋರಾಟದ ಕಾರಣದಿಂದಾಗಿ ಯಾಜಕರು ಮತ್ತು ಭಕ್ತವಿಶ್ವಾಸಿಗಳು ಈಗಾಗಲೇ ಈ ಪ್ರದೇಶವನ್ನು ತೊರೆದಿದ್ದರು.
'ಹಿಂಸಾಚಾರವನ್ನು ಕೊನೆಗೊಳಿಸಲು ತೀವ್ರವಾದ ಮನವಿ'
ಧರ್ಮಗುರು ಡೊನಾಲ್ಡ್ ರವರಿಗೆ ಸಂತಾಪ ಸೂಚಿಸುವ ತಮ್ಮ ಕೈ ಪತ್ರದಲ್ಲಿ, ಕಾರ್ಡಿನಲ್ ಬೊರವರು ಹೀಗೆ ಹೇಳುತ್ತಾರೆ, "ಫೆಬ್ರವರಿ 14, 2025ರ ಶುಕ್ರವಾರ ಸಂಜೆ ಮ್ಯಾಂಡಲೆಯ ಕಥೋಲಿಕ ಮಹಾಧರ್ಮಕ್ಷೇತ್ರದ ಧರ್ಮಗುರು ಡೊನಾಲ್ಡ್ ಮಾರ್ಟಿನ್ ಯೆ ನೈಂಗ್ ವಿನ್ ರವರನ್ನು ಶಸ್ತ್ರಸಜ್ಜಿತ ಜನರ ಗುಂಪಿನಿಂದ ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ನಮಗೆ ಬಂದಿತು. ಈ ಸುದ್ದಿಯಿಂದ ನಮಗೆ ತೀವ್ರ ಆಘಾತ ಮತ್ತು ದುಃಖವಾಗಿದೆ ಎಂದು ಹೇಳಿದ್ದಾರೆ.
ಮ್ಯಾನ್ಮಾರ್ನಾದ್ಯಂತದ ಕಥೋಲಿಕ ಧರ್ಮಸಭೆಯ, ಮಂಡಲೆಯ ಮಹಾಧರ್ಮಾಧ್ಯಕ್ಷರಾದ ಮಾರ್ಕೊ ಟಿನ್ ವಿನ್ ರವರು, ಯಾಜಕರು, ಧಾರ್ಮಿಕರು, ಮಂಡಲೆ ಮಹಾಧರ್ಮಕ್ಷೇತ್ರದ ಭಕ್ತವಿಶ್ವಾಸಿಗಳು ಮತ್ತು ದಿವಂಗತ ಯಾಜಕರಾದ ಬರ್ಮೀಸ್ ರವರ ಪೋಷಕರು ಮತ್ತು ಸಂಬಂಧಿಕರು, ಮ್ಯಾನ್ಮಾರ್ ಧರ್ಮಸಭೆಯ ಮುಖ್ಯಸ್ಥರು, ಈ ಗುರುಗಳನ್ನು ಕಳೆದುಕೊಂಡ ನಷ್ಟಕ್ಕೆ ಶೋಕ ವ್ಯಕ್ತಪಡಿಸುತ್ತಿದ್ದಾರೆ.
"ಎಲ್ಲಾ ಜೀವಗಳ ಪ್ರಭುವಾದ ತಂದೆಯಾದ ದೇವರು, ನಿಮ್ಮ ಮತ್ತು ನಮ್ಮ ದುಃಖಿತ ಹೃದಯಗಳಿಗೆ ಸಾಂತ್ವನ ನೀಡಲಿ" ಎಂದು ಕಾರ್ಡಿನಲ್ ಬೊರವರು ಪ್ರಾರ್ಥಿಸಿದರು.
"ನಾವು ಎದುರಿಸುತ್ತಿರುವ ಈ ಹೃದಯವಿದ್ರಾವಕ ಅನುಭವಗಳಿಂದ ಕಲಿಯುವುದೇನೆಂದರೆ, ಸಹೋದರತ್ವದ ಮನೋಭಾವ ಜಾಗೃತಗೊಳ್ಳಲಿ ಮತ್ತು ನಾವು ಹಿಂಸಾಚಾರವನ್ನು ಕೊನೆಗೊಳಿಸಲು ಮನಃಪೂರ್ವಕವಾಗಿ ಮನವಿ ಮಾಡುತ್ತೇವೆ" ಎಂದು ಅವರು ಬೇಡಿಕೊಂಡರು.
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯುವುದು
ಧರ್ಮಗುರು ಡೊನಾಲ್ಡ್ ಮಾರ್ಟಿನ್ ಯೆ ನೈಂಗ್ ವಿನ್ ರವರ ವಿರುದ್ಧ ನಡೆದ ತಪ್ಪನ್ನು ಸುಲಭವಾಗಿ ಮರೆಯುವ ವಿಷಯವಲ್ಲ ಎಂದು ಕಾರ್ಡಿನಲ್ ಬೊರವರು ಹೇಳಿದರು.
ಆದ್ದರಿಂದ, ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ನ್ಯಾಯ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಜವಾಬ್ದಾರಿಯುತರನ್ನು ಒತ್ತಾಯಿಸುತ್ತೇವೆ ಎಂದು ಅವರು ಒತ್ತಿ ಹೇಳಿದರು.
"ದೇವರ ಕರುಣೆಯಿಂದ ಧರ್ಮಗುರು ಡೊನಾಲ್ಡ್ ಮಾರ್ಟಿನ್ ಯೆ ನೈಂಗ್ ರವರ ಆತ್ಮಕ್ಕೆ ನಿತ್ಯ ವಿಶ್ರಾಂತಿ ಸಿಗಲಿ!" ಎಂದು ಅವರು ಮುಕ್ತಾಯಗೊಳಿಸಿದರು.
ಪ್ರತಿಯೊಂದು ದಾಳಿಗೂ ತೀವ್ರ ಖಂಡನೆ
ಕಾರ್ಡಿನಲ್ ಬೊರವರ ಸಂತಾಪದ ಜೊತೆಗೆ, ಮ್ಯಾನ್ಮಾರ್ನಲ್ಲಿರುವ ಪ್ರೇಷಿತ ರಾಯಭಾರಿಯೂ ಕೂಡ ಧರ್ಮಗುರುವಿನ ಹತ್ಯೆಯ ಬಗ್ಗೆ ತನ್ನ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಲಿಕಾಸ್ ಸುದ್ಧಿ ವರದಿ ಮಾಡಿದೆ.
ಚಾರ್ಜ್ ಡಿ'ಅಫೇರ್ಸ್ ಆಫ್ ದಿ ನನ್ಶಿಯೇಚರ್ ಶ್ರೇಷ್ಠಗುರು ಆಂಡ್ರಿಯಾ ಫೆರಾಂಟೆರವರು ತಮ್ಮ "ತೀವ್ರ ದುಃಖ" ವನ್ನು ವ್ಯಕ್ತಪಡಿಸಿದರು ಮತ್ತು ಜೀವನ ಹಾಗೂ ಮಾನವ ಘನತೆಯ ಮೇಲಿನ ಪ್ರತಿಯೊಂದು ದಾಳಿಯನ್ನು ಬಲವಾಗಿ ಖಂಡಿಸಿದರು ಮತ್ತು ಸಂಘರ್ಷಗಳನ್ನು ಪರಿಹರಿಸುವ ಸಾಧನವಾಗಿ ಎಲ್ಲಾ ರೀತಿಯ ಹಿಂಸಾಚಾರವನ್ನು ಖಂಡಿಸಿದರು.
ಅಪಾಯಗಳ ಹೊರತಾಗಿಯೂ, ಮಹಾಧರ್ಮಕ್ಷೇತ್ರದಲ್ಲಿರುವ ಯಾಜಕರು, ಧಾರ್ಮಿಕರು ಮತ್ತು ಧರ್ಮಪ್ರಚಾರಕರು ತಮ್ಮ ಧ್ಯೇಯದಲ್ಲಿ ದೃಢವಾಗಿ ನಿಲ್ಲುವಂತೆ ರಾಜತಾಂತ್ರಿಕರು ಒತ್ತಾಯಿಸಿದರು.
"ದೇವರ ಪ್ರೀತಿಯಲ್ಲಿ ಬೇರೂರಿರುವ," ಶ್ರೇಷ್ಠಗುರು ಫೆರಾಂಟೆರವರು "ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸ್ವಾಗತಿಸುವ ಮತ್ತು ಅವರು ಗಾಯಗಳನ್ನು ಗುಣಪಡಿಸುವ ಕರುಣಾಮಯಿಯಾದ ತಂದೆ-ದೇವರ ಉಪಸ್ಥಿತಿಯ ಸಂಕೇತವಾಗಲಿ" ಎಂದು ಪ್ರೋತ್ಸಾಹಿಸಿದರು.