ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡ ಉಕ್ರೇನಿಯಾದ ಧರ್ಮಗುರು
ಸ್ವಿಟ್ಲಾನಾ ಡುಖೋವಿಚ್
ಥಿಯೋಫನಿ ಹಬ್ಬಕ್ಕೆ (ಯೇಸುವಿನ ದೀಕ್ಷಾಸ್ನಾನ) ದಿವ್ಯಬಲಿಪೂಜೆಯನ್ನು ಅರ್ಪಿಸಲು ಮತ್ತು ನೀರಿನ ಸಾಂಪ್ರದಾಯಿಕ ಆಶೀರ್ವಾದವನ್ನು ನೀಡಲು ಗುರುಗಳಾದ ಇಹೋರ್ ಮಕರ್ ತಮ್ಮ ಕಾರಿನಲ್ಲಿ ಹೊರಡುತ್ತಿದ್ದಾಗ ರಷ್ಯಾದ ಡ್ರೋನ್ ದಾಳಿಯಿಂದ ಗಾಯಗೊಂಡರು.
ಈ ಘಟನೆ ದಕ್ಷಿಣ ಉಕ್ರೇನ್ನ ಖೇರ್ಸನ್ ನಗರದ ಬಳಿ ಇರುವ ಝೆಲೆನಿವ್ಕಾ ಬಳಿ ಸಂಭವಿಸಿದೆ.
ಉಕ್ರೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆಯ ಧರ್ಮಗುರು ಮಕರ್ ಮತ್ತು ಖೇರ್ಸನ್ನಲ್ಲಿರುವ ಕ್ಯಾರಿಟಾಸ್ನ ನಿರ್ದೇಶಕರು, ಜನವರಿ 6ರಂದು ಡ್ರೋಹೋಬಿಚ್ ಗುರುವಿದ್ಯಾಮಂದಿರದ (ಪಶ್ಚಿಮ ಉಕ್ರೇನ್ನಲ್ಲಿರುವ) ಗುರುವಿದ್ಯಾರ್ಥಿಗಳೊಂದಿಗೆ ಇದ್ದರು, ಆಗ ಅವರು ರಸ್ತೆಯಲ್ಲಿ ರಷ್ಯಾದ ಡ್ರೋನ್ ಅನ್ನು ಗಮನಿಸಿದರು.
"ನಾವು ನಮ್ಮ ಧರ್ಮಕೇಂದ್ರದ ಭಕಾಧಿಯೊಬ್ಬರ ಹಿಂದೆ ನಮ್ಮ ಕಾರನ್ನು ಚಾಲನೆ ಮಾಡುತ್ತಿದ್ದೆವು," ಆಗ ನಾನು ಆಕಾಶದಲ್ಲಿ ಡ್ರೋನ್ ಅನ್ನು ಗಮನಿಸಿದೆ ಎಂದು ಗುರುಗಳು ಹೇಳಿದರು. ಹಿಮದಿಂದಾಗಿ, ರಸ್ತೆ ತುಂಬಾ ಜಾರುತ್ತಿದ್ದ ಕಾರಣ, ನಾವು ನಿಲ್ಲಿಸಲು ಅಥವಾ ಹಿಂತಿರುಗಲು ಸಾಧ್ಯವಾಗಲಿಲ್ಲ... ಈ ಡ್ರೋನ್ ಬಹುಶಃ ನಮ್ಮನ್ನು ಗುರಿಯಾಗಿಸಿಕೊಂಡಿದೆ ಎಂದು ನನಗೆ ಆಗ ಅರಿವಾಯಿತು."
ಮುಷ್ಕರದಿಂದ ಉಂಟಾದ ಸ್ಫೋಟವು ಕಾರಿನ ಕಿಟಕಿಗಳನ್ನು ಒಡೆದು, ಬಾಗಿಲುಗಳು ಮತ್ತು ಚಕ್ರಗಳನ್ನು ಚುಚ್ಚಿತು. ಅದೃಷ್ಟವಶಾತ್, ಗುರುವಿದ್ಯಾರ್ಥಿಗಳು ಗಾಯಗೊಂಡಿಲ್ಲ, ಆದರೆ ಗುರುಗಳ ಕಾಲಿನಲ್ಲಿ ಸಿಲುಕಿರುವ ಚೂರುಗಳ ತುಂಡನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ.
ಯಾಜಕರ ದೈವಕರೆ
ಫಾದರ್ ಮಕರ್ 2005 ರಿಂದ ಖೆರ್ಸನ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ಮೊದಲ ಧರ್ಮಕೇಂದ್ರವು ಆಂಟೋನಿವ್ಕಾದಲ್ಲಿತ್ತು, ಇದು ಡ್ನಿಪ್ರೊ ನದಿಯ ದಡದಲ್ಲಿದೆ ಮತ್ತು ಆದ್ದರಿಂದ ಈಗ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಮುಂಚೂಣಿಯಲ್ಲಿದೆ.
ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾಗುವವರೆಗೂ ಪಾಶ್ಚಾತ್ಯ ಕಥೋಲಿಕ ಧರ್ಮಸಭೆಯ ಗುರುವು ತಮ್ಮ ಪತ್ನಿ ಮತ್ತು ಅವರ ನಾಲ್ಕು ಮಕ್ಕಳೊಂದಿಗೆ ಅಲ್ಲಿಯೇ ವಾಸಿಸುತ್ತಿದ್ದರು.
2022ರ ನವೆಂಬರ್ 11 ರವರೆಗೆ ನಡೆದ ಖೆರ್ಸನ್ನ ರಷ್ಯಾದ ಆಕ್ರಮಣದ ಸಮಯದಲ್ಲಿ, ಪಶ್ಚಿಮ ಉಕ್ರೇನ್ನ ಟೆರ್ನೋಪಿಲ್ನಲ್ಲಿ ತಮ್ಮ ಕುಟುಂಬದೊಂದಿಗೆ ಇದ್ದ ಧರ್ಮಕೇಂದ್ರದ ಗುರು, ದೂರದಿಂದಲೇ ತಮ್ಮ ಧರ್ಮಕೇಂದ್ರದ ಭಕ್ತಾಧಿಗಳಿಗೆ ಮತ್ತು ಆಕ್ರಮಣದಲ್ಲಿ ಉಳಿದಿದ್ದ ನಿರ್ಗತಿಕರಿಗೆ ಅಡುಗೆ ಮನೆಯಿಂದ, ಸೂಪ್, ಔಷಧ ಮತ್ತು ಆಹಾರವನ್ನು ಕಳುಹಿಸುವುದರ ಮೂಲಕ ಸಹಾಯ ಮಾಡಿದರು.
ಖೇರ್ಸನ್ ಉಕ್ರೇನಿಯಯ ನಿಯಂತ್ರಣಕ್ಕೆ ಮರಳಿದ ನಂತರ, ಗುರುಗಳಾದ ಮಕರ್ ರವರು ಈ ಪ್ರದೇಶದ ಎರಡು ಧರ್ಮಕೇಂದ್ರಗಳಲ್ಲಿ ಸೇವೆ ಸಲ್ಲಿಸುವುದನ್ನು ಮತ್ತು ಪ್ರತಿದಿನ ದಾಳಿಗಳು ನಡೆಯುವ ಪ್ರದೇಶದಲ್ಲಿ ಜನಸಂಖ್ಯೆಗೆ ಸಹಾಯ ಮಾಡುವುದನ್ನು ಮುಂದುವರೆಸಿದ್ದಾರೆ.
"ಇಲ್ಲಿ ವಾಸಿಸುವುದು ನಿಜವಾಗಿಯೂ ಅಪಾಯಕಾರಿ," ಎಂದು ಗುರುಗಳಾದ ಮಕರ್ ರವರು ಕಳೆದ ಜುಲೈನಲ್ಲಿ "ಇಲ್ಲಿ ವಾಸಿಸುವುದು ನಿಜವಾಗಿಯೂ ಅಪಾಯಕಾರಿ, ಆದರೆ ಜನರು ಇಲ್ಲಿ ವಾಸಿಸುತ್ತಲೇ ಇದ್ದಾರೆ ಮತ್ತು ಗುರುವಾಗಿ ಅವರೊಂದಿಗೆ ಇರುವುದು ನನ್ನ ದೈವಕರೆಯಾಗಿದೆ" ಎಂದು ವ್ಯಾಟಿಕನ್ ಸುದ್ಧಿಗೆ ಹೇಳಿದರು.
ಕ್ರಿಸ್ಮಸ್ ಹಬ್ಬದಂದು ರಷ್ಯಾದ ದಾಳಿಗಳು
ಖೇರ್ಸನ್ನಲ್ಲಿ, ಕೆಲವು ಸನಾತನ ಧರ್ಮಸಭೆಯು ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಿದ್ದ ದಿನದಂದು, ಬೈಜಾಂಟೈನ್ ವಿಧಿಯ ಕಥೊಲಿಕರು ಥಿಯೋಫನಿ ಮತ್ತು ಲತೀನ್ ವಿಧಿಯವರು ಪ್ರಭುವಿನ ದೈವದರ್ಶನ(ಎಪಿಫ್ಯನಿ) ಹಬ್ಬವನ್ನು ಆಚರಿಸುತ್ತಿದ್ದರು, ಆಗ ರಷ್ಯಾದ ಸೈನ್ಯವು ಶುಮೆನ್ಸ್ಕಿ ಜಿಲ್ಲೆಯಲ್ಲಿ ಬಸ್ ಮೇಲೆ ದಾಳಿ ಮಾಡಿತು.
ಈ ದಾಳಿಯಲ್ಲಿ ಪುರಸಭೆಯ ಪರಿಸರ ಇಲಾಖೆಯ ಉದ್ಯೋಗಿಯೊಬ್ಬರು ಸಾವನ್ನಪ್ಪಿದರು ಮತ್ತು ಎಂಟು ಜನರು ಗಾಯಗೊಂಡರು.
ಖೇರ್ಸನ್ ಪ್ರದೇಶದ ಶಿರೋಕಾ ಬಾಲ್ಕಾ ಗ್ರಾಮದಲ್ಲಿ, ರಷ್ಯಾದವರು ಡ್ರೋನ್ನಿಂದ ಸ್ಫೋಟಕಗಳನ್ನು ಹಾರಿಸಿದರು, ಬೀದಿಯಲ್ಲಿ ನಿಂತಿದ್ದ 48 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು.
ಕ್ರಿಸ್ಮಸ್ ನ ಮುಂದಿನ ದಿನದಂದು ಮತ್ತು ಡಿಸೆಂಬರ್ 25ರ ಮುಂಜಾನೆ, ರಷ್ಯಾ ಬೃಹತ್ ದಾಳಿಯನ್ನು ಪ್ರಾರಂಭಿಸಿತು: ಒಟ್ಟಾರೆಯಾಗಿ, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸೇರಿದಂತೆ 70ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ನೂರಕ್ಕೂ ಹೆಚ್ಚು ದಾಳಿ-ಡ್ರೋನ್ಗಳು. ಅದರ ಮುಖ್ಯ ಗುರಿ ದೇಶದ ಇಂಧನ ವಲಯವಾಗಿತ್ತು, ಆದರೆ ದಾಳಿಗಳು ನಾಗರಿಕ ಸಾವು ಮತ್ತು ಗಾಯಗಳಿಗೆ ಕಾರಣವಾಯಿತು.
ಡಿಸೆಂಬರ್ 31 ರಂದು ಪ್ರಕಟವಾದ ಉಕ್ರೇನ್ನಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮೇಲ್ವಿಚಾರಣಾ ಕಾಯಕದ ವರದಿಯ ಪ್ರಕಾರ, ಸೆಪ್ಟೆಂಬರ್ ಮತ್ತು ನವೆಂಬರ್ 2024ರ ನಡುವೆ, ಯುದ್ಧದ ಪರಿಣಾಮವಾಗಿ ದೇಶದಲ್ಲಿ 574 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 3082 ಜನರು ಗಾಯಗೊಂಡಿದ್ದಾರೆ.